Saturday, March 12, 2011

GUÁæt

¦æAiÉÄÃ

¤£Àß ªÀÄgÉAiÀįÁgÀzÀ

£É£À¥ÀÄUÀ½UÉ

£À£Àß

PÀtÄÚUÀ¼Éà GUÁæt

¥Àæ±Éß

ªÀ¸ÀAvÀ ¸ÀÄj¹zÀ

E§â¤

PÀgÀUÀĪÀ ªÀÄÄ£ÀߪÉÃ

VæÃµÀä ¸ÀÄj¸À¨ÉÃPÉÃ

PÀA§¤ ?

ªÀÄÆqÀt

¥ÁævÀ

PÁ®zÀ°è

¸ÀÆAiÀÄð

ºÀÄlÄÖªÀ

ºÉjUÉ ªÀÄ£É

¦æÃvÀÄ PɪÀiÁä¬Ä

Tuesday, December 28, 2010

ಮತ್ತೆಂದೂ ಈ ವರ್ಷ ಬಾರದೆ ಇರಲಿ

ಹೌದು ಈ ಮಾತು ಹೇಳಲು ಕಾರಣವಿದೆ. ರಾಜ್ಯದ ಪಾಲಿಗೆ ಈ ವರ್ಷವಂತೂ ದುಸ್ವಪ್ನ ! ಪಾಲಿಟಿಕ್ಸ್ ನ ಗಲೀಜ್ ಟ್ರಿಕ್ಸ್ ಗೆ ಇಡೀ ರಾಜ್ಯವೇ ಬಲಿಯಾಗಿದೆ. ಅಭಿವೃದ್ದಿ ಅನ್ನೋದು ಕನಸಿನ ಗಂಟಾಗಿ ಉಳಿದಿದೆ.

ಅದ್ ಹ್ಯಾಗೋ, ಸರ್ಕಾರ ತೆವಳುತ್ತಾ ಕುಂಟುತ್ತ ಸಾಗಿತ್ತು. ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ಕೂಡ ನಡೆದಿತ್ತು. ಹೊಸ ಸಫಾರಿ ಹೊಲಿಸಿಕೊಂಡ ಸಿಎಂ, ಗುಲ್ಬರ್ಗಕ್ಕೆ ಹೋಗಿದ್ರೆ, ಇಲ್ಲಿ ಮತ್ತೊಂದಿಷ್ಟು ಸಚಿವರು ಶಾಸಕರು ಚೆನ್ನೈ ಗೆ ಹಾರಿ ಹೋಗಿದ್ರು. ಸರ್ಕಾರ ಅಪಾಯಕ್ಕೆ ಸಿಲುಕಿತು.

ಆಮೇಲೆ ನಡೆಯಿತು ನೋಡಿ ಮಾಟ, ಮಂತ್ರ, ತಂತ್ರದ ಅನಾಚಾರ ! ಇಡೀ ರಾಜ್ಯಕ್ಕೆ ಇದಕ್ಕಿಂತ ದೊಡ್ಡ ಕಂಟಕ ಏನಿದೆ ಹೇಳಿ ? ಜನ ಛೀ ಥೂ ಅಂತ ಉಗಿದು ಉಪ್ಪಿನಕಾಯಿ ಹಾಕಿದರು ನಮ್ಮನ್ನಾಳುವ ಜನರಿಗೆ ಬುದ್ದಿ ಬರಲಿಲ್ಲ. ತಮಿಳುನಾಡು ಕೇರಳ ಅಂತ ಸುತ್ತಾಡಿದ್ದೆ ಸುತ್ತಾಡಿದ್ದು. ತಮ್ಮದೇ ಶಾಸಕರನ್ನು ನಂಬದ ಸಿಎಂಗೆ, ಅದ್ಯಾವುದೋ ದೇವರ ಮೇಲೆ, ಮಾಂತ್ರಿಕರ ಮೇಲೆ ನಂಬಿಕೆ ! ಜನರ ಆಶೀರ್ವಾದದಿಂದ ಗೆದ್ದ ಸಿಎಂ ಗೆ ಜನರ ಮೇಲು ವಿಶ್ವಾಸವಿರಲಿಲ್ಲ. ಇದ್ದಿದ್ರೆ, ಅವರು ಯಾವತ್ತೂ ರಾಜ್ಯವನ್ನು ಈ ಸ್ಥಿತಿಗೆ ತರುತ್ತಿರಲಿಲ್ಲ.

ಸಿಎಂ ವಿಚಾರ ಅತ್ತ ಕಡೆ ಇರಲಿ. ಪ್ರಜ್ಞಾವಂತ ರಾಜ್ಯದ ಮತ್ತೊಂದು ಕತೆ ಕೇಳಿ.

ಅದೊಂದು ಫೈನ್ ಡೇ . ನಾವೆಲ್ಲ ಗೌರವದಿಂದ ಕಾಣುವ ವಿಧಾನ ಸೌಧದ ಗೇಟುಗಳಲ್ಲೇ ಬಿದ್ದಿತ್ತು ನೋಡಿ ಹಳದಿ, ನಿಂಬೆ, ಗೊಂಬೆ, ಕುಂಕುಮ ! ಅದನ್ನು ನೋಡಿದ ಎಂಥವರಿಗೂ ಬೇರೆ ಯೋಚನೆಯೇ ಇಲ್ಲದೆ ಗೊತ್ತಾಗಿತ್ತು. ಅಲ್ಲಿ ವಾಮಾಚಾರ ನಡೆದಿತ್ತು. ವಿಧಾನಸೌಧಕ್ಕೆ ವಾಮಾಚಾರ !

ಬಹುಶ ರಾಜ್ಯದ ಜನತೆ ಕನಸಲ್ಲೂ ಇಂತಹ ಘಟನೆ ನೋಡಿರಲಿಕ್ಕಿಲ್ಲ. ಈಗಿನ ರಾಜಕಾರಣಿಗಳು ರಾಜ್ಯದ ಜನತೆ ತಲೆತಗ್ಗಿಸುವಂತಹ ಕೆಲಸ ಮಾಡಿದ್ದರೆ. ತಾವು ಅಧಿಕಾರಕ್ಕಾಗಿ ಏನೂ ಮಾಡಲು ಸಿದ್ಧ ಅಂತ ಘೋಷಿಸಿದ್ದಾರೆ. ೨೦೧೦ರ ಉದ್ದಕ್ಕೂ ಇಂತಹ ಘಟನೆಗಳು ನಡೆದೇ ಇವೆ. ಸೀನಿಯರ್ಸೆ ಮಾಡಿದ್ಮೇಲೆ ತಮಗೇನು ಅಂತ ಪಂಚಾಯತ್ ಚುನಾವಣೆಯಲ್ಲೂ ಮಾಟ ಮಂತ್ರದ ಪ್ರಯೋಗವಾಗಿದೆ.

ರಾಜಕಾರಣಿಗಳೇ ದಯವಿಟ್ಟು ಮನ ಮರ್ಯಾದೆಯಿಂದ ನಡೆದುಕೊಳ್ಳಿ. ಒಂದು ಕಾಲಕ್ಕೆ ಸ್ವಚ್ಚ ರಾಜಕಾರಣಕ್ಕೆ ಹೆಸರಾದ ನಾಡು ನಮ್ಮದು. ಮತ್ತೆಂದು ಹೀಗೆ ಮಾಡಬೇಡಿ. ರಾಜಕೀಯದ ಮಟ್ಟಿಗೆ, ಕನ್ನಡಿಗರು ೨೦೧೦ನ್ನು ಮರೆತುಬಿಡುತ್ತಾರೆ. ಇಂತಹ ವರ್ಷವನ್ನು ಮತ್ತೆ ತರಬೇಡಿ, ಪ್ಲೀಸ್ .

Saturday, July 31, 2010

ಮೌನಗಳ ಮಾತು

ಅವಳು, ಅಂದರೆ ಅವಳು. ವಯಸ್ಸು ೧೬ ಇರಬಹುದಷ್ಟೇ. ಅವಳು ನನ್ನ ಸ್ಪೂರ್ತಿ. ನನ್ನ ಜೀವನ, ನನ್ನ ಸರ್ವಸ್ವ. ಅವಳ ಹೆಸ್ರು ? ಗೊತ್ತಿಲ್ಲ. ಅವಳು ಯಾರು ಗೊತ್ತಿಲ್ಲ. ಅದಕ್ಕೆ ಅವಳು ಅವಳೇ. ಅವಳು ನಕ್ಕರೆ ಮಿಂಚಿನ ಕಾಂತಿ. ಬಿರಿದ ಸೂರ್ಯನಂತೆ ಅವಳ ಕಣ್ಣುಗಳು. ಆದ್ರೂ ಕೆಲವೊಮ್ಮೆ ತಂಪು ಚಂದಿರನಂತೆ. ಮೋಡದಿಂದ ಉದುರುವ ಹನಿಗಳಂತೆ ಅವಳ ನಡೆ. ಅವಳ ಕಾಲ್ಗೆಜ್ಜೆ ಕಿಣಿಕಿಣಿಗೆ ಬಸ್ಸೂ ಮೌನ.

ಹೌದು, ಆಕೆ ನನಗೆ ದಿನಾ ಬಸ್ಸಿನಲ್ಲಿ ಸಿಗುತ್ತಿದ್ದಳು. ಆಗ ಪಿಯುಸಿ. ಮನಸ್ಸು ಹುಚ್ಚು ಕುದುರೆ. ಕ್ಷಣದಲ್ಲಿ ಎಲ್ಲೆಂದರಲ್ಲಿ ಅಡ್ಡಾಡಿ ಬರುವಂತಹದ್ದು. ಕನಸುಗಳು ಆವಿರ್ಭವಿಸುವ ಕಾಲ. ಅವಳ ಮೊಗ ಕಂಡಾಗ ಮಾತು ಮೌನ. ಮನಸ್ಸು ಸ್ತಬ್ಧ. ಭಾವನೆಗಳು ಮಲಗುತ್ತವೆ. ಯೋಚನೆಗಳು ಹುಟ್ಟುತ್ತವೆ. ಪದಗಳು ಗೀಚಲ್ಪಡುತ್ತವೆ. ಅವುಗಳಿಗೆ ಕತೆ. ಕವನ, ಚುಟುಕುಗಳೆಂದು ನಾನಾ ಹೆಸರನ್ನು ಇಟ್ಟು ಸಾಹಿತಿಯಾಗಲು ಪ್ರಯತ್ನಿಸುತ್ತೇನೆ. ಸಂಭಾವಿತನೆನಿಸಿಕೊಳ್ಳುವ ಬಯಕೆ. ಬರವಣಿಗೆ ಒಂದು ಹುಚ್ಚು. ನನ್ನ ಹುಚ್ಚಿಗೆ ಅವಳೇ ಸ್ಪೂರ್ತಿ.

ನಮ್ಮ ನಡುವಿನ ಸಂಬಂಧ ಕೊಂಡಿ ಕೆಂಪು ಬಸ್ಸು. ಪ್ರತಿದಿನ ಅವಳನ್ನು ನೋಡುತ್ತಿದ್ದೆ. ಮಾತನಾಡಲೆಂದು ಬಾಯಿ ತೆರೆಯುತ್ತಿದ್ದೆ. ಆಗುತ್ತಿರಲಿಲ್ಲ. ದಿನವೂ ಹೀಗೆಯೇ ನಡೆಯುತ್ತಿತ್ತು. ಅವಳ ಸೌಂದರ್ಯವನ್ನು ಬಣ್ಣಿಸುವುದಷ್ಟೇ ನನ್ನ ಲೇಖನಿಗೆ ಕೆಲಸವಾಗಿತ್ತು. ಮೌನ ಸದಾ ಮೌನ. ಇಷ್ಟಾದ್ರೂ, ಅವಳ ಒಲವೆಂಬ ಮೌನ ಸಂಜೀವಿನಿ ನನ್ನ ಹಾಡಿಗೆ ಜೀವ ತುಂಬುತ್ತಿತ್ತು. ನಾನೆಲ್ಲೋ ಹಾಡುತ್ತಿದ್ದೆ. ಅವಳೆತ್ತಲೋ ನೋಡುತ್ತಿರುತ್ತಾಳೆ. ಬಸ್ಸು ಓಡುತ್ತಲೇ ಇರುತ್ತದೆ. ಇಳಿಯುವಲ್ಲಿ ಇಳಿಯುತ್ತಾಳೆ. ನನಗೆ ಮತ್ತಷ್ಟು ದೂರ ಅದೇ ಬಂಡಿಯ ಪಯಣ. ಛೇ ಅವಳು ನನ್ನ ಮನೆಯ ಪಕ್ಕದಲ್ಲೆ ಇರಬಾರದಿತ್ತೇ ? ಮನ ಕಾತರಿಸುತ್ತದೆ.

ದಿನಗಳು ಉರುಳಿದವು. ಈಗ ಅವಳಿಗೆ ಬೆರೆ ಬಸ್ಸು. ನಾನು ಮತ್ತೆ ಮತ್ತೆ ಅವಳು ಕುಳಿತುಕೊಳ್ಳುತ್ತಿದ್ದ ಅದೇ ಸೀಟನ್ನು ನೋಡಿ ಕನವರಿಸುತ್ತೇನೆ. ಈಗ ಮಾತುಗಳಿಗೆ ಜೀವವಿದೆ. ಸ್ಪೂರ್ತಿ ಇಲ್ಲ. ಮನಸ್ಸಿನ ಅಲೆದಾಟಗಳು ಅಲ್ಲಲ್ಲೇ ಅಡಗಿ ಕುಳಿತಿವೆ. ಮನಸ್ಸು ಸುಮ್ಮನೇ ಕೊರಗುತ್ತಿದ್ದರೂ ಅದಕ್ಕೆ ಸಾವಿರ ಕನಸುಗಳಿವೆ. ಮಾತಿಲ್ಲದೆ ಮನಸ್ಸು ವಿಭ್ರಾಂತವಾಗಿದೆ. ಅಳಲಾರದೆ ನಗುತ್ತೇನೆ..ನಗಲಾರದೆ ಅಳುತ್ತೇನೆ. ಏಳಲಾರದೆ ಬೀಳುತ್ತೇನೆ. ಪುಸ್ತಕಗಳು, ಹಾಳೆಗಳು, ಪೆನ್ನು ಕಲ್ಪನೆಗೆ ಬಣ್ಣ ಹಚ್ಚುತ್ತಿದ್ದ ವಸ್ತುಗಳೆಲ್ಲಾ ಸ್ಟ್ರೈಕ್ ಮಾಡ್ತಿವೆ. ಸೋ, ನೆನಪುಗಳಾ ಚಿತ್ರ ಬಿಚ್ಚಿ, ಕಣ್ಣೆದುರಿಗಿಟ್ಟುಕೊಂಡು ಹಾಗೇ ದಿಂಬಿಗೊರಗುತ್ತೇನೆ. ಕಂಬನಿ ಹನಿಕಿಸಿ ಒದ್ದೆ ಮಾಡುತ್ತೇನೆ. ಸುಂದರ ನೆನಪುಗಳ ಲೋಕದಲ್ಲಿ ಚಿನ್ನದ ಉಯ್ಯಾಲೆ ಕಟ್ಟುತ್ತೇನೆ. ತೂಗುತ್ತೇನೆ. ನಿದ್ದೆ ಹತ್ತುವುದಿಲ್ಲ. ಕನಸುಗಳಿಗೆ ಜೀವ ತುಂಬಲು ಹೆಣಗುತ್ತೇನೆ. ಈ ಹೆಣಗಾಟದಲ್ಲಿ ನಿದ್ದೆ ಬಂದದ್ದೇ ತಿಳಿಯುವುದಿಲ್ಲ. ಮೌನಗಳು ಹೊದಿಕೆಯಾಗುತ್ತವೆ..... ಮಾತುಗಳು ಹಾಸಿಗೆಯಾಗುತ್ತವೆ.

ಪ್ರಶ್ನೆ ಕಾಡುತ್ತದೆ. ಯಾಕೆ ಹೀಗೆ ? ನಾನೇನೂ ಭಗ್ನ ಪ್ರೇಮಿ ಅಲ್ಲ. ಅಥವಾ ಅವಳನ್ನು ಪ್ರೀತಿಸಿ, ವಿಫಲವಾದವನೂ ಅಲ್ಲ. ಅಸಲಿ ಅವಳನ್ನು ಆ ದೃಷ್ಟಿಯಿಂದ ನೋಡಿದವನೂ ಅಲ್ಲ. ಅವಳನ್ನು ಕೇವಲ ಸ್ಪೂರ್ತಿಯಾಗಿ ಕಂಡೆ. ಅವಳಿಲ್ಲದೆ ಏನೂ ಇಲ್ಲ. ಬರೆಯಲು ಬೆರಳುಗಳು ಓಡುತ್ತಿಲ್ಲ. ಬರವಣಿಗೆ ಇಲ್ಲದೆ ಜೀವನವಿಲ್ಲ. ಬದುಕಬೇಕು. ಏನೋ ಬರೆಯಲು ಹೋಗುತ್ತೇನೆ.... ಅದು ಮತ್ತಿನ್ನೇನೋ ಆಗುತ್ತದೆ. ಕಳೆದ ದಿನಗಳ ಆಕೆಯ ನೆಪದಲ್ಲೇ ಪದಗಳ ಸೃಷ್ಟಿಸಲು ಪ್ರಯತ್ನಿಸುತ್ತೇನೆ. ಸೃಷ್ಟಿಕರ್ತನೆನಿಸಿಕೊಳ್ಳಲು. ಆದರೂ ಅವಳ ನೆನಪು ಕಾಡುತ್ತಲೇ ಇರುತ್ತದೆ.

ಬಹುಷ: ನೆನಪುಗಳು ಹೊಚ್ಚ ಹೊಸದಾಗಿ ಕಾಡಾಲು ಅವಳ ಮೌನವೇ ಕಾರಣವಿರಬಹುದು. ಅವಳ ಜೊತೆ ಮಾತನಾಡಿದ್ದಿದ್ದರೆ, ತಪ್ಪುಗಳು ನಡೆದು, ನಮ್ಮ ಸಂಬಂಧ ಹಳಸಬಹುದಿತ್ತು. ಈಗ ಆ ನೋವಿಲ್ಲ. ನಮ್ಮ ನಡುವೆ ಉಲಿದು ಹೋದ ಮೌನ ನಮ್ಮ ಸಂಬಂಧವನ್ನು ನಿತ್ಯ ನೂತನಗೊಳಿಸುತ್ತಿದೆ. ಮೌನಗಳ ಮಾತು ಎಷ್ಟು ಮಧುರ ? ಆ ನೆನಪು ಎಷ್ಟೊಂದು ಸಿಹಿ. ಆ ಮೌನ ಮತ್ತಷ್ಟು ದಿನ ಉಳಿಯಲಿ. ಆ ಹುಡುಗಿ ಮತ್ತೆ ನನ್ನ ಮುಂದೆ ಮೌನವಾಗಿ ನಲಿದಾಡಬೇಕು. ಸ್ಪೂರ್ತಿ ನೀಡಬೇಕು. ಇಂತಹ ಆಸೆಗಳಿಗೇನೂ ಕಮ್ಮಿ ಇಲ್ಲ. ಮೌನಗಳ ಆ ಮಧುರ ನೆನಪುಗಳೇ ಹಾಗೆ, ಬೇಕಾದಾಗ್, ಬೇಡವಾದಾಗಲೆಲ್ಲಾ ಧುತ್ತೆಂದು ಕಾಡಿ ಮರೆಯಾಗುತ್ತವೆ. ಉಳಿಯೋದು ಕನವರಿಕೆ ಮಾತ್ರ. ಆ ಕನವರಿಕೆಯಲ್ಲೇ ಪುಟ್ಟದೊಂದು ಸ್ವರ್ಗ ಸೃಷ್ಟಿಯಾಗುತ್ತದೆ. ಅಲ್ಲಿ ಎಲ್ಲವೂ ನಾನೇ. " ಆವ ರೂಪದೊಳು ಬಂದರೂ ಸರಿಯೇ, ಆವ ವೇಷದೊಳು ನಿಂದರೂ ಸರಿಯೇ.... ಹೊಸ ಬಾಳಿನ, ಹೊಸ ಗಾಳಿಯ, ಹೊಸ ಸ್ಪೂರ್ತಿಯ ತಾ ಹುಡುಗಿ ಅಂತ ಗರ್ಭದ ಕೂಸು ಪಿಸುಗುಡುತ್ತದೆ. ಆಕೆ ಎಲ್ಲಿ ? ವರ್ಷಗಳು ಉರುಳಿದ್ರೂ ನನ್ನ ಕಣ್ಣು ಹುಡುಕ್ತಾನೇ ಇವೆ...

Monday, December 8, 2008

ಏನೋ ಹೇಳಬಹುದಿತ್ತು

ನಾನು ನಿನಗೆ ಏನೋ ಹೇಳಬಹುದಿತ್ತು
ನೀನೂ ನನಗೆ ಏನೋ ಹೇಳಬಹುದಿತ್ತು
ಏನೂ ಹೇಳದೆಯೇ ಕಳೆದು ಹೋಯಿತು
ಆದರೂ ಆ ಬದುಕು ಅದೆಷ್ಟು ಚೆನ್ನಾಗಿತ್ತು.

ಆ ದಾರಿಯ ತುಂಬಾ ಮುಳ್ಳುಗಳಿದ್ದವು
ನೀನು ಜತೆಗಿದ್ದಾಗ ಗೊತ್ತೇ ಇರಲಿಲ್ಲ
ಸವೆಸಿ, ಸವೆಸಿ ಒಂಟಿಯಾದ ಪಯಣಿಗನಿಗೆ
ಏನೋ ಹೇಳಬಹುದಿತ್ತು.

ನೀನು ನಡೆದ ನೆಲ ಮಿದುವಾಗಿದೆ. ಅದು
ನನ್ನೆದೆ ಎಂದು ತಿಳಿದದ್ದು ನೀನು ತೀರ
ತಲುಪಿದ ಮೇಲೆಯೇ, ನಿನಗೆ
ಏನೋ ಹೇಳಬಹುದಿತ್ತು.

ಸಂಜೆಗಳನ್ನೆಲ್ಲಾ ಸುಮ್ಮನೆ ಪುಡಿಗಟ್ಟಿದೆವು
ನೀನು ಮೌನವಾಗಿ, ನಾನು ಕಿವುಡನಾಗಿ
ಕೂತು ಕೂತು ಹಾಗೇ ಎದ್ದು ಹೋಗಿದ್ದೆವು
ಏನೋ ಹೇಳಬಹುದಿತ್ತು.

ಬದುಕಿನಲ್ಲಿ ಕನಸುಗಳನ್ನು ತೇಲಿಬಿಟ್ಟೆವು
ಶೂನ್ಯವೇ ಮಿತಿಯೆಂಬಂತೆ
ಕೊನೆಗೆ ಉಳಿದದ್ದು ಅದು ಮಾತ್ರ- ಬೆಚ್ಚಗಾಗಿ
ಇಬ್ಬರಿಗೂ ಏನೋ ಹೇಳಬಹುದಿತ್ತು
ಆದರೂ ಆ ಬದುಕು ಅದೆಷ್ಟು ಚೆನ್ನಾಗಿತ್ತು.

Sunday, December 7, 2008

ಹಕ್ಕಿ ಮತ್ತು ಪ್ರಶ್ನೆ

ಪರಿಸ್ಥಿತಿ
ಅಷ್ಟೊಂದು ಅಸಹನೀಯವಾಗದೇ
ಇರುತ್ತಿದ್ದರೆ ಆ ಹಕ್ಕಿಗೆ
ರೆಕ್ಕೆಪುಕ್ಕಗಳು ಹುಟ್ಟುತ್ತಿರಲಿಲ್ಲ
ನಭದಿ ಹಾರುತ್ತಿರಲೂ ಇರಲಿಲ್ಲ
ಈಗಲೂ ಅಷ್ಟೆ..
ತೀರಾ ಸಹನೀಯವಾಗೇನೂ ಇಲ್ಲ .
ರೆಕ್ಕೆಯಲ್ಲಿ ರಂಧ್ರಗಳು
ಕಾಣುವುದೆಷ್ಟೋ, ಕಾಣದ್ದೆಷ್ಟೋ
ದರಿದ್ರ, ಬರ, ಬಡತನ, ಕೊನೆಯಿಲ್ಲದ್ದು.
ಭ್ರಷ್ಟ, ಹೊಟ್ಟೆಬಾಕತನ ಮುಗಿಯದ್ದು.
ರೆಕ್ಕೆಯಂತೂ ಛಿದ್ರಛಿದ್ರ
ನೆತ್ತರ ಕಾರುವ ಆಕ್ರಂದನ,
ಮೇಧಾವಿಯ ಕಿವಿಗೆ ದೂರ
ಹಕ್ಕಿ ಅರಚುತ್ತಲೇ ಇದೆ.
ಚಪ್ಪಾಳೆ ಮೊಳಗುತ್ತಲೇ ಇದೆ.
ಹಕ್ಕಿಯ ಅಳಿವು-ಉಳಿವು ?

ಉಳಿದದ್ದು ಅದೊಂದೇ ಪ್ರಶ್ನೆ.

Friday, November 7, 2008

ಆಕೆಗೆ ಡಿಕ್ಕಿ ಹೊಡೆದಿದ್ದೆ !

ತುಂಬಾ ದಿನ ಆಯ್ತು ನಿಮ್ಮ ಜೊತೆ ಮಾತನಾಡಿ. ಕೆಲಸದ ಒತ್ತಡಗಳು, ಹಬ್ಬದ ಗೌಜಿ ಎಲ್ಲಾ ಮುಗಿದು ಒಂದಿಷ್ಟು ನಿರುಮ್ಮಳನಾಗಿದ್ದೇನೆ. ಹಾಗಾಗಿ ಈಗ ಮತ್ತೆ ಅಂಗಳಕ್ಕೆ ಬಂದಿದ್ದೇನೆ. ನಾನು ಈಗ ಹೇಳ ಹೊರಟಿರುವುದು ಮತ್ತದೇ ಬಾಲ್ಯದ ಬಗ್ಗೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ನಾನು ಬಾಲ್ಯವನ್ನು ಅದೆಷ್ಟು ಆಸ್ವಾದಿಸಿದ್ದೇನೋ, ಅಷ್ಟೇ ಬೇಗ ಬಾಲ್ಯವನ್ನು ಕಳೆದುಕೊಂಡಿದ್ದೇನೆ. ಆಗ ಹಾಕಲು ಇದ್ದದ್ದು ಮೂರೇ ಮೂರು ಚೆಡ್ಡಿ, ನಾಲ್ಕು ಅಂಗಿ. ಬ್ರಾಹ್ಮಣರಾದ ನಮಗೆ ಸರಕಾರದಿಂದ ಸಮವಸ್ತ್ರವೂ ಲಭಿಸುತ್ತಿರಲಿಲ್ಲ. ವಷ೯ಕ್ಕೊಂದು ಹೊಸ ಜೊತೆ ಧಿರಿಸು ತೆಗೆದುಕೊಂಡರೆ, ಹಳೆಯ ಒಂದು ಜೊತೆಗೆ ವಿಆರ್‍ ಎಸ್‌ ಕೊಡ್ತಾ ಇದ್ದೆ. ಆದರೆ, ನನ್ನ ಬಾಲ್ಯದ ಅವಾಂತರಗಳಿಗೆ ಏನೂ ಬರವಿರಲಿಲ್ಲ.

ನಂಗೆ ನಿದ್ದೆ ಮಾಡೋದು ಅಂದ್ರೆ ತುಂಬಾ ಆಸಕ್ತಿ. ಇದರಲ್ಲೇನೂ ವಿಶೇಷ ಇಲ್ಲ ಅಂದ್ಕೋಬೇಡಿ. ಯಾಕಂದ್ರೆ ಅದು ನಂಗೆ ಬರೇ ಆಸಕ್ತಿಯ ವಿಚಾರವಷ್ಟೇ ಆಗಿರಲಿಲ್ಲ, ಒಂದು ರೀತಿಯಲ್ಲಿ ನನಗೆ ನಿದ್ದೆ ಮಾಡೋದು ಚಾಳಿ ! ಪ್ರೈಮರಿಯಲ್ಲಿದ್ದಾಗ ನಿದ್ದೆಯಿಂದಾದ ಅವಾಂತರಗಳ ಬಗ್ಗೆ ಅಷ್ಟೊಂದು ನೆನಪಿಲ್ಲ. ಆದ್ರೆ, ಅದಕ್ಕೊಂದು ವಿಶ್ವವ್ಯಾಪಿ ಮಾನ್ಯತೆ ಸಿಕ್ಕಿದ್ದು ಡಿಗ್ರಿ ಕಾಲೇಜಿಗೆ ಸೇರಿದ ಮೇಲೆಯೇ ! ನನ್ನಿಂದ ಪ್ರಭಾವಿತರಾದವರು, ನನ್ನ ಆಟೋಗ್ರಾಫ್ ತುಂಬಾ ನನ್ನ ನಿದ್ದೆಯ ವಿವಿಧ ಭಂಗಿಗಳ ಚಿತ್ರಗಳನ್ನು ಬಿಡಿಸಿಟ್ಟಿದ್ದಾರೆ. ಅದಕ್ಕೆ ವಿವಿಧ ಹೆಸರುಗಳನ್ನೂ ಇಟ್ಟಿದ್ದಾರೆ. ಅಧ೯ಕಟಿ ನಿದ್ರಾಸನ, ಪದ್ಮ ನಿದ್ರಾಸನ, ಬೆಂಚಾಸನ, ಹೀಗೆ ಯೋಗಾಸನದ ವಿವಿಧ ಭಂಗಿಗಳನ್ನು ನಾನು ನಿದ್ದೆ ಹೊಡೆಯುವ ವಿವಿಧ ಭಂಗಿಗಳ ಜೊತೆ ಸಮೀಕರಿಸಿದ್ದಾರೆ.
ಒಂದಿನ ರಾತ್ರಿ ೭ ಗಂಟೆಗೆ ಹಾಸ್ಟೆಲ್‌ನಲ್ಲಿ ಚೇರ್‌ ಮೇಲೆ ಕುಳಿತುಕೊಂಡು ನಿದ್ದೆ ಮಾಡುತ್ತಿದೆ. ನಮ್ಮ ಹಾಸ್ಟೆಲ್ ಮೇಟ್ ಗಳು ನನ್ನ ಟೇಬಲ್ ಮೇಲೆ ಕಸದ ಬುಟ್ಗಿ, ಊಟದ ತಟ್ಟೆ , ಹಾಸಿಗೆ ಎಲ್ಲಾ ಎತ್ತಿಟ್ಟಿದ್ದರು. ವಾಡ೯ನ್‌ ಬರುವವರೆಗೆ ನಂಗೆ ಎಚ್ಚರವೇ ಇರಲಿಲ್ಲ. ಆಮೇಲೆ ಕಂಟಿನ್ಯೂಸ್ ಆಗಿ ೧೫ ದಿನ ಡೈರಿಯಿಂದ ಸೆಗಣಿ ಎತ್ತಿದ್ದೆ, ಪನಿಷ್‌ಮೆಂಟ್ !

ಅದಾಗಿ ಒಂದು ವಾರ ಕಳೆದಿರಲಿಲ್ಲ. ಸ್ಟಡಿ ಹವರ್‌ನಲ್ಲೇ ಮಲಗಿದ್ದೆ. ಮತ್ತದೇ ಗೆಳೆಯರು ನನ್ನ ಮೇಲೆ ಬಿಳಿ ಪಂಚೆ ಹೊದೆಸಿದರು. ಮತ್ಯಾರೋ ಊದುಬತ್ತಿ ಉರಿಸಿದರು. ಸಣ್ಣ ಶಲ್ಯವನ್ನು ಮಡಚಿ ನನ್ನ ಕತ್ತಿಗೆ ಹಾಕಿದರು. ಪಕ್ಕದಲ್ಲಿ ಕುಳಿತು ಅತ್ತರು. ಸಾಲದ್ದಕ್ಕೆ ಫೋಟೋ ಹೊಡೆದರು. ಇದನ್ನೆಲ್ಲಾ ಕಿಟಕಿ ಮೂಲಕ ವಾಡ೯ನ್ ನೋಡುತ್ತಿದ್ದದ್ದನ್ನು ಯಾರೂ ಗಮನಿಸಿರಲಿಲ್ಲ. ವಾಡ೯ನ್ನೂ ಕೇಳಲಿಲ್ಲ. ಆದರೆ, ಬೆಳಿಗ್ಗೆ ಬಂದವರೇ, ಗೆಸ್ಟ್ ಬಂದಿದ್ದಾರೆ ಎಂದು ಹೇಳಿ ಕ್ಯಾಮೆರಾ ತೆಗೆದುಕೊಂಡು ಹೋದರು. ಪ್ರಿನ್ಸಿಪಾಲ್ ಫೋನ್ ಮಾಡಿ ಕರೆಸಿಕೊಂಡಾಗಲೇ ನಮಗೆ ಜ್ಞಾನೋದಯವಾದದ್ದು.

ಅದು ಡಿಗ್ರಿಯ ಕೊನೆಯ ವಷ೯. ಪರೀಕ್ಷೆಗಳೆಲ್ಲಾ ಮುಗಿದಿತ್ತು. ಕಾಲೇಜಿನ ವಾಷಿ೯ಕ ಸಂಚಿಕೆ ಪೂತಿ೯ ಗೊಳಿಸಲು ನಾವಿನ್ನೂ ಹಾಸ್ಟೆಲ್‌ನಲ್ಲೇ ಇದ್ದೆವು. ಮತ್ತದೇ, ನಿದ್ದೆಯ ಮಂಪರಿನಲ್ಲಿ, ಕಾಲೇಜಿನತ್ತ ಹೆಜ್ಜೆ ಹಾಕುತ್ತಿದ್ದೆ. ಹಾಗೆ ನಡೆಯುತ್ತಿದ್ದಾಗಲೇ ಭಿಕ್ಷುಕಿಯೊಬ್ಬಳಿಗೆ ಡಿಕ್ಕಿ ಹೊಡೆದುಬಿಟ್ಟೆ. ತಗೊಳ್ಲಿ, ಜೀವನ ಪೂತಿ೯ ಖಚಿ೯ಗಾಗುವಷ್ಟು ಬೈಗುಳಗಳನ್ನು ಆಕೆ ದಾನವಾಗಿ ನೀಡಿದ್ದಳು. ಸತತ ೧೩ ದಿನವೂ ಬೆಳಿಗ್ಗೆ ಕಾಲೇಜಿಗೆ ಹೋಗುವಾಗ ಆಕೆಯಿಂದ ಉಗಿಸಿಕೊಳ್ಳುವ ಭಾಗ್ಯ ನನ್ನದಾಗಿತ್ತು ! ಅದೇ ಕೊನೆ, ಆಮೇಲೆ ಯಾವತ್ತೂ ಅತಿರೇಕವಾಗಿ ನಿದ್ದೆ ಮಾಡಿಲ್ಲ. ಪತ್ರಿಕೋದ್ಯಮ ಕ್ಷೇತ್ರದಲ್ಲಿರೋದ್ರಿಂದ ಅದಕ್ಕೆ ಅವಕಾಶವೂ ಕಡಿಮೆಯೇ. ನನ್ನ ನಿದ್ರಾಸನಗಳ ಬಗ್ಗೆ ದೊಡ್ಡ ಪುಸ್ತಕ (?) ಬರೆದು, ಲೋಕಾಪ೯ಣೆ ಮಾಡಬೇಕೆಂದಿದ್ದೇನೆ. ನನ್ನ ಹಾಗೆ ನಿಮಗೂ ನಿದ್ದೆಯಿಂದ ಪ್ರಯೋಜನಗಳಾಗಿದ್ದರೆ, ಬರೆದು ತಿಳಿಸಿ.

Wednesday, October 1, 2008

ಅಲ್ಲಿ ಇನ್ನೂ ದೆವ್ವ ಇದೆ !


ಅಲ್ಲಿ ಇನ್ನೂ ದೆವ್ವ ಇದೆ ! ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ. ಆದ್ರೆ ನಾವು ಚಿಕ್ಕವರಿದ್ದಾಗ ಅದನ್ನು ಸಂಪೂರ್ಣ ನಂಬಿದ್ದೆವು... ಹೆದರಿಕೊಂಡಿದ್ದೆವು. ಅಂತಹದ್ದೊಂದು ಜಾಗ ಇದ್ದದ್ದು ನಮ್ಮ ಶಾಲೆಯ ಹಿಂಬದಿ ಗುಡ್ಡದಲ್ಲಿ. ನಾನು ಓದಿದ್ದು ಸುಳ್ಯ ತಾಲೂಕಿನ ಜಯನಗರ ಶಾಲೆಯಲ್ಲಿ. ಮದ್ಯಾಹ್ನ ಊಟ ಆದ ಬಳಿಕ, ಆಟದ ವೇಳೆಯಲ್ಲಿ ನಾವು ಕಳ್ಳ ಪೋಲಿಸ್ ಆಟ ಆಡುತ್ತಿದ್ದೆವು. ನಮಗೆ ಅಡಗಿಕೊಳ್ಳಲು ಜಾಗ ಸಿಗುತ್ತಿದ್ದದ್ದೇ ಶಾಲೆಯ ಹಿಂಬದಿ ಗುಡ್ಡದಲ್ಲಿ. ಅಲ್ಲಿ ಗೇರು ಬೀಜದ ತೋಪು ಇತ್ತು. ಗೇರು ಬೀಜದ ಮರದ ಕೊಂಬೆಗಳ ಮೇಲೆ ಅಡಗಿಕೊಳ್ಳುತ್ತಿದ್ದೆವು .


ಆ ತೋಪಿನ ತುತ್ತ ತುದಿಯಲ್ಲಿ ಒಂದು ಗುಡಿಸಲು ಇತ್ತು. ಅರ್ಧ ಗೋಡೆ ಮಣ್ಣಿನಲ್ಲಿ ಕತ್ತಲಾಗಿತ್ತು.. ಉಳಿದರ್ಧ ಗೋಡೆಗೆ ತೆಂಗಿನ ಗರಿಗಳಿಂದ ಮಾಡಿದ್ದ ತಟ್ಟಿಗಳನ್ನು ಪೇರಿಸಲಾಗಿತ್ತು. ತೋಪಿನ ಅರೆಕತ್ತಲೆಯಲ್ಲಿ ಆ ಗುಡಿಸಲು ಒಂದು ವಿಚಿತ್ರ ಭಯವನ್ನು ಮೊದಲ ನೋಟಕ್ಕೆ ಹುಟ್ಟಿಸುತ್ತಿತ್ತು. ನಮ್ಮ ಗೆಳೆಯರು ಕೂಡ ಆ ಮನೆಯ ಬಗ್ಗೆ ಬಗೆಬಗೆಯ ಕತೆಗಳನ್ನು ಆಗಾಗ ಹೇಳುತ್ತಿದ್ದರು. ಹಾಗಾಗಿ ನಾವ್ಯಾರೂ ಅತ್ತ ಸುಳಿಯುತ್ತಿರಲಿಲ್ಲ. ಆ ಭಯs ಶಾಲೆ ಬಿಟ್ಟ ಮೇಲೂ ಹಾಗೆಯೇ ಉಳಿದಿತ್ತು.


ಇತ್ತೀಚಿಗೆ ನಮ್ಮ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮ ಆಚರಣೆ ಇತ್ತು. ನಾವೆಲ್ಲಾ ಓದುತ್ತಿದ್ದಾಗ ರಾಷ್ಟ್ರೀಯ ಹಬ್ಬಗಳಿಗೆ ಅಣಿಯಾಗುತ್ತಿದ್ದ ಸಿದ್ಧವಾಗುತ್ತಿದ್ದ ಸಂಭ್ರಮ ನಮಗೆ ನೆನಪಾಯ್ತು. ಆ ಖುಷಿಯೊಂದಿಗೆ ಶಾಲೆಯ ಆವರಣವನ್ನೆಲ್ಲಾ ಬಣ್ಣದ ಕಾಗದಗಳಿಂದ ಸಿಂಗರಿಸಿದ್ದೆವು. ಕಾರ್ಯಕ್ರಮ ಆರಂಭಗೊಳ್ಳಲು ಸಮಯವಿತ್ತು. ಹಾಗಾಗಿ ನಾವು ಕಳ್ಳ ಪೊಲೀಸ್ ಆಟ ಆಡಲು ಆರಂಭಿಸಿದೆವು. ಅಟಗಿಕೊಳ್ಳಲು ಮತ್ತದೇ ಗೇರುಬೀಜದ ತೋಪಿನತ್ತ ಹೋದೆವು. ಆಗ ನಮ್ಮನ್ನು ಮತ್ತೆ ಕಾಡಿದ್ದು ದೆವ್ವ !

ಆಟ ಬಿಟ್ಟು ಈಗ ಪಾಳು ಬಿದ್ದಿರುವ ಆ ಗುಡಿಸಲಿನತ್ತ ನಾವು ಹೋದೆವು. ಶಾಲೆಯಲ್ಲಿ ಓದುತ್ತಿದ್ದಾಗ ಸಾಧ್ಯವಾಗದ ರಹಸ್ಯ ಭೇಧಿಸಲು ಈಗ ಸಮಯ ಕೂಡಿ ಬಂದಿತ್ತು. ಅಂತೂ ಇಂತು ಆ ಗುಡಿಸಲಿನ ಹತ್ತಿರ ಬಂದೆವು. ಹೆಜ್ಜೆಗಳು ಮಾತ್ರ ಹಿಂದೆ ಹಿಂದೆ ಸರಿಯುತ್ತಿದ್ದವು. ಈಗ ಆ ಗುಡಿಸಲು ಕುಸಿದು ಬಿದ್ದಿದೆ. ಅರೆ ಬರೆ ಮಣ್ಣಿನ ಗೋಡೆ ಮಾತ್ರ ಉಳಿದಿದೆ. ಇನ್ನೇನು ಒಳಗೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ ಗೆಳೆಯ ಪ್ರವೀಣ ಅಂದ... ಏರೋ ಪಾತೆರ್‍ಲೆಕ್ಕ ಆಂಡ್ ! ( ಯಾರೋ ಮಾತನಾಡಿದ ಹಾಗಾಯ್ತು !) ನಾವು ಎದ್ದೆವೋ ಬಿದ್ದೆವೋ ಅಂತ ಓಡಿದೆವು. ಸುಸ್ತು ಆಗಿ ಶಾಲೆಯ ಪಡಸಾಲೆಯಲ್ಲಿ ಬಿದ್ದುಕೊಂಡೆವು. ಕೊನೆಗೂ ರಹಸ್ಯ ಭೇದಿಸಲು ಸಾಧ್ಯವೇ ಆಗಲಿಲ್ಲ. ಕಾಯ೯ಕ್ರಮ ಎಲ್ಲಾ ಮುಗಿಯಿತು. ಶಾಲೆಯ ಅಭಿವೃದ್ದಿಗೆ ನಮ್ಮಿಂದಾಗುವಷ್ಟು ಸಹಾಯ ಮಾಡಿ ಮತ್ತೆ ನಮ್ಮ ನಮ್ಮ ಊರಿನತ್ತ ಹೊರಟು ನಿಂತಿದ್ದೆವು.

ಊರಿಗೆ ಮರಳುವ ಮುನ್ನ ಮತ್ತೊಮ್ಮೆ ದೆವ್ವವನ್ನು ನೋಡುವ ಇಚ್ಛೆಯಾಯಿತು. ಅದ್ಹೇಗೋ ನಮ್ಮ ಅವಾಂತರಗಳನ್ನೆಲ್ಲಾ ತಿಳಿದುಕೊಂಡ, ನಮ್ಮ ತಮಿಳು ಮಾಷ್ಟ್ರು ನಡೆದ ಕತೆಯನ್ನೆಲ್ಲಾ ನಮಗೆ ಹೇಳಿದರು. ಆ ಮನೆಯಲ್ಲಿದ್ದ ಅಜ್ಜಿ ವಿಧಿವಶರಾಗಿ ವರುಷಗಳೇ ಕಳೆದಿವೆಯಂತೆ. ದಿಕ್ಕಿಲ್ಲದ ಹೆಂಗಸು ಅವರಿವರ ತೋಟದಲ್ಲಿ ಕೆಲಸ ಮಾಡಿಕೊಂಡು ಬದುಕು ಸವೆಸುತ್ತಿದ್ದಳು, ಹಾಗಾಗಿ ನಮಗೆ ಅವಳನ್ನು ನೋಡುವ ಭಾಗ್ಯವೇ ಸಿಕ್ಕಿರಲಿಲ್ಲ. ವಿಷಯ ಗೊತ್ತಿಲ್ಲದ ನಮ್ಮಂತಹ ಅದೆಷ್ಟೋ ಮಕ್ಕಳು ಆ ತೋಪಿನಿಂದ ಗೇರು ಬೀಜಗಳನ್ನು ಕದಿಯುತ್ತಿರಲಿಲ್ಲ ಅನ್ನುವುದೇ ನೆಮ್ಮದಿಯ ಸಂಗತಿ. ಯಾಕೆಂದರೆ ಅಲ್ಲಿ ದೆವ್ವವಿತ್ತಲ್ಲ ! ನಮ್ಮಂತೆ ಅದೆಷ್ಟೋ ಮಕ್ಕಳ ಮನಸ್ಸಿನಲ್ಲಿ ಭಯದ ಮೂಲಕವೇ ಸ್ಥಾನ ಗಿಟ್ಟಿಸಿದ್ದ ಅಜ್ಜಿಯ ನೆನಪಿಗೆ ನಮ್ಮ ಶಾಲೆಗೆ ದೊಡ್ಡದೊಂದು ಗಡಿಯಾರ ನೇತು ಹಾಕಿ ಬಂದಿದ್ದೇವೆ. ಅಜ್ಜಿ ಬದುಕಿರುವಾಗ ನಾವು ಏನು ಮಾಡಲೂ ಸಾಧ್ಯವಾಗಿರಲಿಲ್ಲ.

ಮೊನ್ನೆ ವಿಜಯಕನಾ೯ಟಕದಲ್ಲಿ ಕತೆಯೊಂದು ಬಂದಿತ್ತು. ಅದನ್ನು ಓದಿ... ನಾನು ನನ್ನ ಬಾಲ್ಯಕ್ಕೆ ಮರಳಿದ್ದೆ.