Wednesday, August 27, 2008

ಡಿವಿಜಿ ರಸ್ತೆ ದೇವೇಗೌಡ್ರದ್ದಾ ?

ಡಿವಿಜಿ ರಸ್ತೆ ದೇವೇಗೌಡ್ರದ್ದಾ ? ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ ಈಗ ಯಾಕೆ ಬಂತು ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರ್‌ ಬಳಿ ಇರುವ ಡಿವಿಜಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದೆ. ನನ್ನ ಮುಂದೆ ಇಬ್ಬರು ಹುಡುಗಿಯರು ನಡೆದುಕೊಂಡು ಹೋಗುತ್ತಿದ್ದರು. ವಯಸ್ಸು ಹೆಚ್ಚೆಂದರೆ ೨೦ರ ಆಸುಪಾಸು. ಇಲ್ಲಿ ಪ್ರಶ್ನೆ ವಯಸ್ಸಿನದ್ದಲ್ಲ. ಅವರ ಜ್ಞಾನದ್ದು.
ಆ ಹುಡುಗಿಯರು ಅಲ್ಲೇ ಎಲ್ಲೋ ಕಾಲೇಜಿಗೆ ಹೊರಟಿದ್ದಿರಬೇಕು. ಡಿವಿಜಿ ರಸ್ತೆಯೂ ಅವರಿಗೆ ತುಂಬಾ ಪರಿಚಯವಿದ್ದಂತಿತ್ತು. ಇಂಗ್ಲೀಷಿನಲ್ಲಿ ಅದೇನೋ ಮಾತನಾಡುತ್ತಿದ್ದರು. ನಾನು ಅದರ ಬಗ್ಗೆ ಗಮನ ಹರಿಸಿರಲಿಲ್ಲ. ಅವರನ್ನು ದಾಟಿ ನಾನು ಮುಂದೆ ಹೋಗುತ್ತಿದ್ದೆ. ಅಷ್ಟರಲ್ಲಾಗಲೇ, ಅವರಲ್ಲೊಬ್ಬಾಕೆ, ವಾಟ್‌ ಈಸ್‌ ದ ಫುಲ್‌ ಫಾಮ್‌೯ (ವಿಸ್ತೃತ ರೂಪ) ಆಫ್‌ ಡಿವಿಜಿ ರೋಡ್‌ ಯಾರ್‌ ಅಂತ ಕೇಳಿದ್ಳು. ಅದಕ್ಕೆ ಮತ್ತೊಬ್ಬಳು ದೇವೇಗೌಡ ರೋಡ್‌ ಯಾರ್‌ ಅಂದ್ಳು. ನಾನು ಬೆಚ್ಚಿಬಿದ್ದೆ ! ಅದ್ಯಾಕೋ, ನಾಡಿನ ಸಂಸ್ಕೃತಿ ಹಿರಿಮೆಯನ್ನು ಎತ್ತಿ ಹಿಡಿದ ಡಿವಿಜಿಯವರಿಗಿಂತಲೂ ದೇವೇಗೌಡ್ರು ಫೇಮಸ್‌ ಆಗಿಬಿಟ್ರಲ್ಲಾ ? (ದೇವೇಗೌಡ್ರು ಕ್ಷಮಿಸಬೇಕು ) ನಮ್ಮ ದೇಶದಲ್ಲಿ ರಾಜಕೀಯದ ಮುಂದೆ ಬೇರೇನೂ ಇಲ್ಲವೇನೋ ? ನಿಮಗೇನನ್ನಿಸತ್ತೆ ?

Sunday, August 24, 2008

ಗ್ರೀನ್ ಪೆನ್ನಿನ ಮಹಿಮೆ

ಮೊನ್ನೆ ಹೀಗೆ ಆಫೀಸ್ನಲ್ಲಿ ಕುಳಿತು ಮಾತನಾಡುತ್ತಿದ್ದೆವು. ಮಾತಿನ ನಡುವೆ ಯಾರೋ ಪೆನ್ ಕೇಳಿದರು. ಮಾತು ಹೊರಳಿ ಪೆನ್ನುಗಳತ್ತಲೇ ತಿರುಗಾದತೊಡಗಿತು. ಆಗ ನನಗೆ ನೆನಪಾದದ್ದು... ನನ್ನ ಗ್ರೀನ್ ಪೆನ್ನು ! ಅದರ ಹಿಂದೆ ದೊಡ್ಡದೊಂದು ಕತೆ ಇದೆ. ನಂಗೆ ಬರೆಯೋದು ಹುಚ್ಚು, ಸಿಕ್ಕವನಿದ್ದಗಲೇ, ಕೈಗೆ ಸಿಕ್ಕಿದ್ದೆಲ್ಲವನ್ನೂ ಗೀಚುತ್ತಿದ್ದೆ. ಹಾಗಾಗಿ ಪೆನ್ನುಗಳೂ ನನ್ನಲ್ಲಿ ತುಂಬಾ ಇದ್ದವು. ಆಗ ಕಡಿಮೆ ಬೆಲೆಗೆ ಸಿಗುತ್ತಿದ್ದ ಪೆನ್ನುಗಳಲ್ಲಿ ತುಂಬಾ ವೆರೈಟಿ ಇರಲಿಲ್ಲ. ತುಂಬಾ ದುಡ್ಡು ಕೊಟ್ಟು ಪೆನ್ನು ಖರೀದಿಸುವ ಶಕ್ತಿ ನನ್ನಲ್ಲಿರಲಿಲ್ಲ.

ಆಗ ಬರುತ್ತಿದ್ದ ಪೆನ್ನುಗಲ್ಲಲ್ಲಿ (ನನ್ನ ಊರಲ್ಲಿ ಸಿಗುತ್ತಿದ್ದ) ಭಾರೀ ಫೇಮಸ್ ಆದದ್ದು ನಾಲ್ಕು ಕದ್ದಿಗಲಿದ್ದ ಪೆನ್ನು. ಅದರಲ್ಲಿ ನೀಲಿ, ಕೆಂಪು, ಕಪ್ಪು ಮತ್ತು ಹಸಿರು ಬಣ್ಣದ ಕದ್ದಿಗಲಿರುತ್ತಿದ್ದವು. ಕಪ್ಪು ಮತ್ತು ನೀಲಿ ಬಣ್ಣದವುಗಳನ್ನು ನಾನು ಬರೆಯಲು ಉಪಯೋಗಿಸುತ್ತಿದ್ದೆ. ನಮ್ಮ ಟೀಚರ್ ಕೆಂಪು ಬಂನದ್ದನ್ನು ಉಪಯೋಗಿಸುತ್ತಿದ್ದರು. ಹಾಜರಿ ಕರೆಯುವಾಗ ಅವರಿಗೆ ಪೆನ್ನು ಕೊಡಲು ನಾವು ಪೈಪೋಟಿ ನಡೆಸುತ್ತಿದ್ದೆವು.

ಆಗೆಲ್ಲಾ, ನಂಗೆ ಎಲ್ಲರಿಗಿಂತ ಡಿಫರೆಂಟ್ ಆಗಿ ಇರಬೇಕು ಅನ್ನುವ ಹುಚ್ಚು ಜಾಸ್ತಿ ಇತ್ತು. ಎಷ್ಟಾದರೂ ಓದಿನಲ್ಲಿ, ಇತರ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಎಲ್ಲರಿಗಿಂತ ಮುಂದೆ ಇದ್ದೆ. ಜೊತೆಗೆ ಊರಲ್ಲಿ ಫೇಮಸ್ ಆಗಿರುವ ನಮ್ಮ ಅಜ್ಜನ ನಾಮ ಬಲವೂ ನನ್ನ ಹಿಂದೆ ಇತ್ತು. ಹಾಗಾಗಿ ನಂಗೆ ಒಂಥರಾ ಇಮೇಜ್ ಇತ್ತು (ಅಹಂ ಅಂದರೂ ತಪ್ಪಲ್ಲ ) ಆ ಹುಚ್ಚಿನಿಂದಾಗಿಯೇ ನಾನು ಗ್ರೀನ್ ಪೆನ್ನಿನಲ್ಲಿ ಬರೆಯುವ ಸಾಹಸಕ್ಕೆ ಕೈ ಹಾಕಿದ್ದು. ನಮಗೆ ಗಣಿತ ಹೇಳಿಕೊಡಲು ಅಶೀರ್ವಾದಂ ಅನ್ನುವ ಮಾಸ್ಟರ್ ಒಬ್ಬರಿದ್ದರು. ಅವರನ್ನು ಕಂಡರೆ ಭಯಂಕರ ಭಯ. ಅವರನ್ನು ತಮಿಳು ಮಾಸ್ಟರ್ ಅಂತ ಕರೆಯುತ್ತಿದ್ದೆವು.

ಗಣಿತ ನೋಟ್ಸ್ ಅನ್ನೇ ನಾನು ಗ್ರೀನ್ ಪೆನ್ನಿನಲ್ಲಿ ಬರೆದದ್ದು. ಶಾಲೆಗೆ ಹೋಗಿ ನೋಟ್ಸ್ ತೋರಿಸಿದ್ದೆ ತಡ, ತಮಿಳು ಮಾಸ್ಟರ್ ನಖಶಿಕಾಂತ ಉರಿದು ಹೋದರು. ನಾಗರ ಬೆಟ್ಟ ತೆಗೆದುಕೊಂಡು ಹೊಡೆದದ್ದೇ ಹೊಡೆದದ್ದು. ಮೂರುದಿನ ಶಾಲೆಗೆ ಕುಂಟುತ್ತಲೇ ನಡೆದಿದ್ದೆ. ಅವಾಗೆಲ್ಲ ಗ್ರೀನ್ ಪೆನ್ನಿನಲ್ಲಿ ಬೆರೆಯುವುದೆಂದರೆ ಡಿಸಿ ಮೊದಲಾದ ದೊಡ್ಡ ಹುದ್ದೆಯಲ್ಲಿ ಇರುವವರು ಮಾತ್ರ ಬರೆಯುತ್ತಿದ್ದರು. ಉಳಿದವರು ಗ್ರೀನ್ ಪೆನ್ನಿನಲ್ಲಿ ಬರೆಯುವುದು ಮಹಾಪರಾಧವಗಿತ್ತು. ನಾನು ಬರೆದಿದ್ದೆ, ಪೆಟ್ಟು ಬಿದ್ದಿತ್ತು. ಆವತ್ತೇ ಕೊನೆ, ಆಮೇಲೆ ಯಾವತ್ತಿಗೂ ಗ್ರೀನ್ ಪೆನ್ನಿನಲ್ಲಿ ಬರೆಯಲಿಲ್ಲ. ಒಂದು ವೇಳೆ ನಾನು ಡಿಸಿ ಆದರೆ ? ಆಗಲ್ಲ ಬಿಡಿ.

Friday, August 22, 2008

ಬಾಗಿನ - ಈಗ ರಾಜಕಾರಣಿಗಳ ಪ್ರಚಾರದ ವಸ್ತು !

ಬಾಗಿನ.... ಅದು ಸೌಭಾಗ್ಯ ಸಂಕೇತ.. ಅದನ್ನು ಸ್ತ್ರೀಧನ ಅಂತಲೂ ಕರೆಯುತ್ತಾರೆ. ಹೆಣ್ಣು ಮಕ್ಕಳಿಗೆ ಗುರವದಿಂದ ಮಂಗಳ ದ್ರವ್ಯಗಳನ್ನು ಕೊಡುವ ಈ ಸಂಪ್ರದಾಯ ತಲೆತಲಾನ್ತರಗಲಿನ್ದಲೂ ನಡೆದು ಬಂದಿದೆ. ಹೆಣ್ಣುಮಕ್ಕಳು ತೌರುಮನೆ ಬಿಟ್ಟು ಗಂಡನ ಮನೆಗೆ ಹೋಗುವುದನ್ನು ತ್ಯಾಗ ಎನ್ನಲಾಗುತ್ತದೆ. ಇದಕ್ಕೆ ಪ್ರತಿಯಾಗಿ ತಾಯಿ ಮನೆಯಿಂದ ಬಿದಿರಿನ ಮೊರದಲ್ಲಿ ಅಕ್ಕಿ, ಅದಕೆ, ವೀಳ್ಯ, ತೆಂಗಿನಕಾಯಿ, ರವಕೆ ಕಣ, ಸೀರೆ, ಚಿನ್ನ ಇತ್ಯಾದಿಗಳನ್ನು ತುಂಬಿ ಹೆಣ್ಣುಮಕ್ಕಳು ಸುಖವಾಗಿರಲೆಂದು ಹಾರೈಸುವುದು ವಾಡಿಕೆ. ಗೌರಿಹಬ್ಬದ ಸಂದರ್ಭದಲ್ಲಿ ಈ ಸಂಪ್ರದಾಯವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಹಾಗೆಯೇ ಭಾರತೀಯ ಸಂಪ್ರದಾಯದಲ್ಲಿ ನದಿಗಳನ್ನೂ ದೇವತೆಯೆಂದು ಪುಉಜಿಸಲಾಗುತ್ತದೆ. ಎಲ್ಲಾ ನದಿಗಳನ್ನೂ ಗಂಗೆ ಎಂದೇ ಭಾವಿಸಲಾಗುತ್ತದೆ. ರಾಜಮಹಾರಾಜರುಗಳು ತುಂಬಿ ಹರಿಯುವ ನದಿಗಳಿಗೆ ಬಾಗಿನ ಅರ್ಪಿಸಿ ಕೃತಜ್ಞತೆ ಸಲ್ಲಿಸುತ್ತಿದ್ದರು. ಪ್ರಜಾಸತ್ತೆ ಜಾರಿಯಾದ ಬಳಿಕವೂ ಈ ಸಂಪ್ರದಾಯ ನಡೆದು ಬಂದಿದೆ. ರಾಜ್ಯದ ಮುಖ್ಯಮಂತ್ರಿಗಳು ಸಮಸ್ತ ಜನರ ಪರವಾಗಿ ನದಿಗಳಿಗೆ, ಜಲಾಶಯಗಳಿಗೆ ಬಾಗಿನ ಅರ್ಪಿಸುತ್ತಿದ್ದರು. ಇದು ಸತ್ಸಂಪ್ರದಾಯ ಅನ್ನುವ ಭಾವನೆ ನಿನ್ನೆ ಮೊನ್ನೆಯವರೆಗೂ ನನ್ನಲ್ಲಿತ್ತು.

ಮೊನ್ನೆ ಕೃಷಿ ಸಚಿವ ರವೀಂದ್ರನಾಥ್ ಅವರ ಬಾಗಿನ ಅರ್ಪಿಸುವ ಕಾರ್ಯಕ್ರಮ ನೋಡಿ ನಂಗೆ ನಿಜಕ್ಕೂ ...(ಕ್ಷಮಿಸಿ ಶಬ್ದ ಸಿಕ್ತಿಲ್ಲ) ಆವತ್ತು, ನಮ್ಮ ಸಚಿವರು ಸುಮಾರು ೬೦ ಬಸ್ ಗಳಲ್ಲಿ ಜನ ತುಂಬಿ ಕೊಂಡು ಹೋಗಿದ್ದರು. ಅಲ್ಲಿ ಭರ್ಜರಿ ಊಟದ ಏರ್ಪಾಡು ಮಾಡಲಾಗಿತ್ತು. ನನಗನ್ನಿಸಿದ್ದು ಇಷ್ಟೇ... ಸಂಪ್ರದಾಯದ ಹೆಸರಿನಲ್ಲಿ ಇಂತಹ ರಾಜಕಾರಣಿಗಳೆಲ್ಲ ಪ್ರಚಾರ ಪಡೆಯುವ ಗೀಳು ಹಚ್ಹ್ಚಿಕೊಂದಿದ್ದಾರ ? ಇಂತಹ ಸಂಪ್ರದಾಯಗಳೂ ಇವತ್ತು ರಾಜಕಾರಣಿಗಳ ಕೈಯಲ್ಲಿ ಬಲಿಯಾಗುತ್ತಿರುವುದು ನಿಜಕ್ಕೂ ದುರಂತ. ಸಾಂಪ್ರದಾಯಿಕ ಮೊರಗಳು ರಾಜಕಾರಣಿಗಳ ಕೈಯಲ್ಲಿ ನಲುಗುತ್ತಿವೆ. ಕೇವಲ ಮುಖ್ಯಮಂತ್ರಿಗಲಿಗಷ್ಟೇ ಸೀಮಿತವಾಗಿದ್ದ ಈ ಸಂಪ್ರದಾಯವನ್ನು ಇವತ್ತು ಎಲ್ಲ ಉಸ್ತುವಾರಿ ಸಚಿವರುಗಳು ಪಾಲಿಸುತ್ತಿದ್ದಾರೆ. ಆಯಾ ಪ್ರದೇಶಗಳ ಶಾಸಕರುಗಲೂ ಇದನ್ನೇ ಪಾಲಿಸುತ್ತಿದ್ದಾರೆ.

ಬಾಗಿನ ಸಲ್ಲಿಸಲೂ ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರ ನಡುವೆ ಪೈಪೋಟಿ ನಡೆಯುತ್ತಿದೆ. ಎಲ್ಲರಿಗಿಂತ ಮೊದಲು ನಾವಿರಬೇಕು ಅನ್ನುವ ಧಾವಂತ ದಿಂದಲೇ ಈಶ್ವರಪ್ಪನವರು ಜಲಾಶಯ ತುಂಬುವ ಮೊದಲೇ ಬಾಗಿನ ಅರ್ಪಿಸಿ ವಿವಾದಕ್ಕೆ ಗುರಿಯಾಗಿದ್ದರು. ಅದಾದ ಬಳಿಕ ಭದ್ರಾವತಿ ಶಾಸಕ ಸಂಗಮೇಶ್ ಕೂಡ ೧೨ ಬಸ್ ಗಳಲ್ಲಿ ಜನ ಹೇರಿಕೊಂಡು ಬಾಗಿನ ಅರಿಪಿಸಿ ಬಂದಿದ್ದರು. ಇದು ಸಂಪ್ರದಾಯದ ಹೆಸರಿನಲ್ಲಿ ಪ್ರಚಾರ ಪಡೆಯುವುದಲ್ಲದೆ ಮತ್ತಿನ್ನೇನು ? ಪುಕ್ಕಟೆ ಪ್ರಚಾರ ಪಡೆಯುವ ಯಾವ sಅಂದರ್ಭಗಳನ್ನೂ ರಾಜಕಾರಣಿಗಳು ಕಳೆದುಕೊಳ್ಳುವುದಿಲ್ಲ ಅನ್ನುವುದಂತೂ ವಾಸ್ತವ. ಆದರೆ ಇಂತಹ ದರ್ದು ರಾಜಕಾರಣಿಗಳಿಗೆ ಇದೆಯಾ ? ಇದ್ದರೆ ಅದಕ್ಕೆ ನಾವು ಯಾಕೆ ಅವಕಾಶ ಮಾಡಿ ಕೊಡಬೇಕು ?

Monday, August 18, 2008

ಆಕೆಗೆ ಎರಡು

1. ಪ್ರಿಯೇ ನಿನ್ನ
ಮಾತುಗಳೆಂದರೆ
ಹಾಗೆಯೇ
ಇಬ್ಬನಿಯ
ಚುಂಬನದ ಹಾಗೆ !

2. ಪ್ರಿಯೇ ನೀನು
ಒಲಿದರೆ ಹುಣ್ಣಿಮೆ
ಇಲ್ಲದಿದ್ದರೆ
ಅಮಾವಾಸ್ಯೆ!

ಅಬ್ಬಾ ! ಅದೆಂಥಾ ರಭಸ

ಮೊನ್ನೆ ಮಂಗಳೂರಿನಲ್ಲಿ ಮಳೆ ಜೋರಾಗಿತ್ತು. ಜಿಲ್ಲೆಯ ಐದೂ ನದಿಗಳು ತುಂಬಿ ಹರಿಯುತ್ತಿದ್ದವು. ಅಲ್ಲಿ ದುರಂತವೊಂದು ಸಂಭವಿಸಿತ್ತು. ಶಾಲೆಗೆಂದು ಹೊರಟ ಮಕ್ಕಳು ಮರಳಿ ಮನೆಗೆ ಬರಲೇ ಇಲ್ಲ. ಫಲ್ಗುಣಿ ನದಿಯಲ್ಲಿ ಮುಳುಗಿದ ಅವರ ಶಾಲಾ ಬಸ್ಸುಆ ಮಕ್ಕಳ ಪ್ರಾಣವನ್ನೇ ಬಲಿ ತೆಗೆದುಕೊಂಡಿತ್ತು. ಸ್ವಾತಂತ್ರ್ಯೋತ್ಸವಕ್ಕೆ ಅಣಿಯಾಗುತ್ತಿದ್ದ ಮಕ್ಕಳು ಈ ಲೋಕವನ್ನೇ ಬಿಟ್ಟು ಹೋದರು.
ಆ ಮಕ್ಕಳು ಉಜ್ವಲ ಭವಿಷ್ಯವನ್ನು ಅರಸುತ್ತಾ ಶಾಲೆಗೆ ತೆರಳುತ್ತಿದ್ದರು. ಸ್ವಾತಂತ್ರ್ಯದ ಸಂಭ್ರಮ ಅವರಲ್ಲಿ ಮನೆ ಮಾಡಿತ್ತು... ಎಂದಿನಂತೆ ಶಾಲಾ ವಾಹನದಲ್ಲಿ ಕುಣಿಯುತ್ತಾ ನಲಿಯುತ್ತಾ ಹೋಗುತ್ತಿದ್ದರು. ಮಂಗಳೂರಿನ ಗುರುಪುರದ ಸಮೀಪ ಉಲ್ಲಾಯಿಬೆಟ್ಟಿನ ಬಾಮಿ ಬಳಿ ಅವರ ಬಸ್ಸು ಬರುತ್ತಿದ್ದಂತೆಯೇ ಅದು ಫಲ್ಗುಣಿ ನದಿಗೆ ಬತ್ತು. ನಿತ್ಯ ಫಲ್ಗುಣಿಯ ಹರಿವನ್ನು ನೋಡಿ ಖುಷಿ ಪಡುತ್ತಿದ್ದ ಮಕ್ಕಳಿಗೆ, ಗುರುವಾರ ಅದೇ ಫಲ್ಗುಣಿ ಮೃತ್ಯು ದೇವತೆಯಾಗಿ ಅವತರಿಸಿದ್ದಳು.
ಅ ಚಿತ್ರಗಳು ನನ್ನ ಕಣ್ಣ ಮುಂದೆ ಬಂದದ್ದೆ ತಡ, ಅರಿವಿಲ್ಲದೆ ನನ್ನ ಕಣ್ಣಲ್ಲಿ ಕಂಬನಿ ಹರಿಯ ತೊಡಗಿತ್ತು. ತುಂಬಾ ವರ್ಷದ ಬಳಿಕ ನಾನು ಬಾಲ್ಯದ ನೆನಪುಗಳನ್ನು ಮೆಲುಕು ಹಾಕತೊಡಗಿದೆ. ನಾನೂ ಅಷ್ಟೆ, ಚಿಕ್ಕವನಿದ್ದಾಗ ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾಗ, ಕೆರೆ ತೊರೆಗಳನ್ನು ದಾಟಿಕೊಂಡು ಹೋಗಬೇಕಿತ್ತು. ಕರಾವಳಿಯ ಮಳೆ ಅಂದರೆ, ಅದು ಭೋರ್ಗರೆತ. ಅದೂ ಹದಿನೈದು ವರ್ಷಗಳ ಹಿಂದಿನ ಮಳೆ. ಗುಡ್ಡ, ಕಾಡು ಮೇಡುಗಳನ್ನು ಹತ್ತಿ ಇಳಿದು ಶಾಲೆಗೆ ಹೋಗಬೇಕಿತ್ತು. ಒಂದೊಂದು ಸಲ ತೊರೆಗಳೆಲ್ಲ ತುಂಬಿ ಹರಿಯುತ್ತಿದ್ದವು. ಮಳೆ ನಿಂತು ಉಬ್ಬರ ಕಡಿಮೆಯಾದ ಬಳಿಕ ಮನೆ ತಲುಪಿ ಕೊಳ್ಳುತ್ತಿದ್ದೆವು. ಆ ಕಡೆಯಿಂದ ಅಜ್ಜ ಟಾರ್ಚು ಹಿಡಿದು ಕೊಂಡು ಬಂದ ದಿನಗಳೂ ಬಹಳಷ್ಟಿವೆ. ಮೊನ್ನೆಯ ಘಟನೆ ನೋಡಿದ ತಕ್ಷಣ ನನ್ನ ಮನಸ್ಸಿಗೆ ಬಂದದ್ದು ನಾನು ಬಾಲ್ಯದಲ್ಲಿ ಕಳೆದ ಆ ದಿನಗಳು. ಒಂದು ವೇಳೆ, ನಾನೂ ತೊರೆ ದಾಟುವಾಗ ಕೊಚ್ಚಿ ಹೋಗುತ್ತಿದ್ದರೆ ?

ಪಾಪ ಆ ಮಕ್ಕಳಿಗೆ ಬಸ್ಸಾದರೂ ಇತ್ತು. ನಾವು ನಡೆದುಕೊಂಡೇ ಬರಬೇಕಿತ್ತು. ಗುಡ್ಡದಿಂದ ನೀರು ಸರಾಗವಾಗಿ ಹರಿದು ಹೋಗುವ ಕರಣ, ಒಮ್ಮೆ ನೀರಿಗೆ ಬಿದ್ದರೆ ಸಾಕಿತ್ತು, ಅದರಿಂದ ಮೇಲೆಳುವುದಂತು ಸಾಧ್ಯವೇ ಇರಲಿಲ್ಲ. ಅಬ್ಬಾ ! ಅದನ್ನು ನೆನೆಸಿಕೊಂಡರೆ ಸಾಕು, ಮೈಎಲ್ಲ ಜುಮ್ ಅನ್ನುತ್ತದೆ. ಅ ಮಕ್ಕಳನ್ನು ನೋಡಿದಾಗ ನಂಗೆ ನೆನಪಾದದ್ದು ನನ್ನ ಬಾಲ್ಯ, ಆ ಭಯ. ಅದನ್ನು ನಿಮ್ಮ ಜೊತೆ ಹೇಳಿ ಕೊಳ್ಳಬೇಕಿತ್ತು ಅಷ್ಟೆ.