Friday, August 22, 2008

ಬಾಗಿನ - ಈಗ ರಾಜಕಾರಣಿಗಳ ಪ್ರಚಾರದ ವಸ್ತು !

ಬಾಗಿನ.... ಅದು ಸೌಭಾಗ್ಯ ಸಂಕೇತ.. ಅದನ್ನು ಸ್ತ್ರೀಧನ ಅಂತಲೂ ಕರೆಯುತ್ತಾರೆ. ಹೆಣ್ಣು ಮಕ್ಕಳಿಗೆ ಗುರವದಿಂದ ಮಂಗಳ ದ್ರವ್ಯಗಳನ್ನು ಕೊಡುವ ಈ ಸಂಪ್ರದಾಯ ತಲೆತಲಾನ್ತರಗಲಿನ್ದಲೂ ನಡೆದು ಬಂದಿದೆ. ಹೆಣ್ಣುಮಕ್ಕಳು ತೌರುಮನೆ ಬಿಟ್ಟು ಗಂಡನ ಮನೆಗೆ ಹೋಗುವುದನ್ನು ತ್ಯಾಗ ಎನ್ನಲಾಗುತ್ತದೆ. ಇದಕ್ಕೆ ಪ್ರತಿಯಾಗಿ ತಾಯಿ ಮನೆಯಿಂದ ಬಿದಿರಿನ ಮೊರದಲ್ಲಿ ಅಕ್ಕಿ, ಅದಕೆ, ವೀಳ್ಯ, ತೆಂಗಿನಕಾಯಿ, ರವಕೆ ಕಣ, ಸೀರೆ, ಚಿನ್ನ ಇತ್ಯಾದಿಗಳನ್ನು ತುಂಬಿ ಹೆಣ್ಣುಮಕ್ಕಳು ಸುಖವಾಗಿರಲೆಂದು ಹಾರೈಸುವುದು ವಾಡಿಕೆ. ಗೌರಿಹಬ್ಬದ ಸಂದರ್ಭದಲ್ಲಿ ಈ ಸಂಪ್ರದಾಯವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಹಾಗೆಯೇ ಭಾರತೀಯ ಸಂಪ್ರದಾಯದಲ್ಲಿ ನದಿಗಳನ್ನೂ ದೇವತೆಯೆಂದು ಪುಉಜಿಸಲಾಗುತ್ತದೆ. ಎಲ್ಲಾ ನದಿಗಳನ್ನೂ ಗಂಗೆ ಎಂದೇ ಭಾವಿಸಲಾಗುತ್ತದೆ. ರಾಜಮಹಾರಾಜರುಗಳು ತುಂಬಿ ಹರಿಯುವ ನದಿಗಳಿಗೆ ಬಾಗಿನ ಅರ್ಪಿಸಿ ಕೃತಜ್ಞತೆ ಸಲ್ಲಿಸುತ್ತಿದ್ದರು. ಪ್ರಜಾಸತ್ತೆ ಜಾರಿಯಾದ ಬಳಿಕವೂ ಈ ಸಂಪ್ರದಾಯ ನಡೆದು ಬಂದಿದೆ. ರಾಜ್ಯದ ಮುಖ್ಯಮಂತ್ರಿಗಳು ಸಮಸ್ತ ಜನರ ಪರವಾಗಿ ನದಿಗಳಿಗೆ, ಜಲಾಶಯಗಳಿಗೆ ಬಾಗಿನ ಅರ್ಪಿಸುತ್ತಿದ್ದರು. ಇದು ಸತ್ಸಂಪ್ರದಾಯ ಅನ್ನುವ ಭಾವನೆ ನಿನ್ನೆ ಮೊನ್ನೆಯವರೆಗೂ ನನ್ನಲ್ಲಿತ್ತು.

ಮೊನ್ನೆ ಕೃಷಿ ಸಚಿವ ರವೀಂದ್ರನಾಥ್ ಅವರ ಬಾಗಿನ ಅರ್ಪಿಸುವ ಕಾರ್ಯಕ್ರಮ ನೋಡಿ ನಂಗೆ ನಿಜಕ್ಕೂ ...(ಕ್ಷಮಿಸಿ ಶಬ್ದ ಸಿಕ್ತಿಲ್ಲ) ಆವತ್ತು, ನಮ್ಮ ಸಚಿವರು ಸುಮಾರು ೬೦ ಬಸ್ ಗಳಲ್ಲಿ ಜನ ತುಂಬಿ ಕೊಂಡು ಹೋಗಿದ್ದರು. ಅಲ್ಲಿ ಭರ್ಜರಿ ಊಟದ ಏರ್ಪಾಡು ಮಾಡಲಾಗಿತ್ತು. ನನಗನ್ನಿಸಿದ್ದು ಇಷ್ಟೇ... ಸಂಪ್ರದಾಯದ ಹೆಸರಿನಲ್ಲಿ ಇಂತಹ ರಾಜಕಾರಣಿಗಳೆಲ್ಲ ಪ್ರಚಾರ ಪಡೆಯುವ ಗೀಳು ಹಚ್ಹ್ಚಿಕೊಂದಿದ್ದಾರ ? ಇಂತಹ ಸಂಪ್ರದಾಯಗಳೂ ಇವತ್ತು ರಾಜಕಾರಣಿಗಳ ಕೈಯಲ್ಲಿ ಬಲಿಯಾಗುತ್ತಿರುವುದು ನಿಜಕ್ಕೂ ದುರಂತ. ಸಾಂಪ್ರದಾಯಿಕ ಮೊರಗಳು ರಾಜಕಾರಣಿಗಳ ಕೈಯಲ್ಲಿ ನಲುಗುತ್ತಿವೆ. ಕೇವಲ ಮುಖ್ಯಮಂತ್ರಿಗಲಿಗಷ್ಟೇ ಸೀಮಿತವಾಗಿದ್ದ ಈ ಸಂಪ್ರದಾಯವನ್ನು ಇವತ್ತು ಎಲ್ಲ ಉಸ್ತುವಾರಿ ಸಚಿವರುಗಳು ಪಾಲಿಸುತ್ತಿದ್ದಾರೆ. ಆಯಾ ಪ್ರದೇಶಗಳ ಶಾಸಕರುಗಲೂ ಇದನ್ನೇ ಪಾಲಿಸುತ್ತಿದ್ದಾರೆ.

ಬಾಗಿನ ಸಲ್ಲಿಸಲೂ ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರ ನಡುವೆ ಪೈಪೋಟಿ ನಡೆಯುತ್ತಿದೆ. ಎಲ್ಲರಿಗಿಂತ ಮೊದಲು ನಾವಿರಬೇಕು ಅನ್ನುವ ಧಾವಂತ ದಿಂದಲೇ ಈಶ್ವರಪ್ಪನವರು ಜಲಾಶಯ ತುಂಬುವ ಮೊದಲೇ ಬಾಗಿನ ಅರ್ಪಿಸಿ ವಿವಾದಕ್ಕೆ ಗುರಿಯಾಗಿದ್ದರು. ಅದಾದ ಬಳಿಕ ಭದ್ರಾವತಿ ಶಾಸಕ ಸಂಗಮೇಶ್ ಕೂಡ ೧೨ ಬಸ್ ಗಳಲ್ಲಿ ಜನ ಹೇರಿಕೊಂಡು ಬಾಗಿನ ಅರಿಪಿಸಿ ಬಂದಿದ್ದರು. ಇದು ಸಂಪ್ರದಾಯದ ಹೆಸರಿನಲ್ಲಿ ಪ್ರಚಾರ ಪಡೆಯುವುದಲ್ಲದೆ ಮತ್ತಿನ್ನೇನು ? ಪುಕ್ಕಟೆ ಪ್ರಚಾರ ಪಡೆಯುವ ಯಾವ sಅಂದರ್ಭಗಳನ್ನೂ ರಾಜಕಾರಣಿಗಳು ಕಳೆದುಕೊಳ್ಳುವುದಿಲ್ಲ ಅನ್ನುವುದಂತೂ ವಾಸ್ತವ. ಆದರೆ ಇಂತಹ ದರ್ದು ರಾಜಕಾರಣಿಗಳಿಗೆ ಇದೆಯಾ ? ಇದ್ದರೆ ಅದಕ್ಕೆ ನಾವು ಯಾಕೆ ಅವಕಾಶ ಮಾಡಿ ಕೊಡಬೇಕು ?

No comments: